Tuesday, April 10, 2007

ಇತಿಹಾಸ ಪುಟಕ್ಕೆ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಲೋಕದ ಖ್ಯಾತ ಹಾಗೂ ಆಧುನಿಕ ಬರಹಗಾರ, ವಿಮರ್ಷಕ, ಕೃಷಿಕ,ಸಂಶೋಧಕ,ಪರಿಸರ ಪ್ರೇಮಿ,ಉತ್ತಮ ಛಾಯಾಗ್ರಾಹಕ ....
ಸರಳ ಮತ್ತು ಮನಮುಟ್ಟುವ ಬರವಣಿಗೆ ಅವರ ವೈಶಿಷ್ಟ್ಯ. ತಬರನ ಕಥೆ, ಕರ್ವಾಲೊ,ಚಿದಂಬರ ರಹಸ್ಯ, ಪರಿಸರದ ಕತೆಗಳು, ಅಬಚೂರಿನ ಪೋಸ್ಟ್ ಆಫೀಸು, ನರಭಕ್ಷಕ,ಕಿರಗೂರಿನ ಗಯ್ಯಾಳಿಗಳು, ನಿಘೂಡ ಮನುಷ್ಯರು... ಮುಂತಾದ ಕೃತಿಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚೊತ್ತಿದ್ದಾರೆ. ಮಲೆನಾಡಿನ ಸುಂದರ ಚಿತ್ರಣ ಅವರ ಕೃತಿಯುದ್ದಕ್ಕೂ ಬಿಂಬಿತವಾಗುತ್ತೆ.
ಅವರ ಅಗಲಿಕೆ.. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ತುಂಬಲಾರದ ನಷ್ಟ.’ಮಾಯಾಲೋಕ’ದ ಕೃತಿಗಾರನಿಗೆ..ಇದೋ ಒಂದು ಅಂತಿಮ ನಮನ...

No comments: