Monday, June 18, 2007

ಕೇರಳದ ಮಲೆನಾಡಿನಲ್ಲಿ ಒಂದು ದಿನ ...ಯಾಂತ್ರಿಕ ಬದುಕಿಗೊಂದು ಪುಟ್ಟ ವಿರಾಮ...



ಸ್ಠಳದ ವಿವರಣೆಗಿಂತ .. ನನಗಾದ ಅನುಭವ ಬರೆಯೋಣ ಅನ್ನಿಸ್ತಿದೆ...ಪ್ರತಿ ದಿನದ ಒಂದೇ ರ್‍ಈತಿಯ ದಿನಚರಿಗೆ.."ರಿಫೆಶ್ಮೆಂಟ್" ಆಗಿ ಅನಿಸಿದ್ದು.. "ವೈನಾಡಿನ" ಪ್ರಯಾಣ.ಪ್ರಕೃತಿಯ ಬೆಟ್ಟ ಗುಡ್ಡಗಳ ನಡುವೆ ... ಸುತ್ತಲಿನ ಸೌಂದರ್ಯ ಆಸ್ವಾದಿಸುತ್ತ... "ಎಡಕಲ್ಲು ಗುಡ್ಡದ" ತುದಿವರೆಗೆ ..ಕಾಲ್ನಡಿಗೆಯಲ್ಲಿ ಸಾಗಿದ್ದು .. ಮನಸ್ಸಿಗೆ ಮುದ ನೀಡುವ ಒಂದು ಉತ್ತಮ ಸಾಹಸ ಯೆನಿಸಿತ್ತು.ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನನಗೆ... ಬಾಲ್ಯವನ್ನು ನೆನಪಿಸಿತ್ತು...೩೦೦ ಮೀಟರ್ ಗಿಂತ ಎತ್ತರವಾದ ,ಕಡಿದಾದ ಕಲ್ಲಿನ ಬೆಟ್ಟ ಹತ್ತುವಾಗ ...ಮೈ ರೋಮಾಂಚನ ಗೊಂಡಿತ್ತು. ಸುತ್ತಲಿನ ವಿಹಂಗಮ ನೋಟ ಅದಮ್ಯ ಉತ್ಸಾಹ ಮೂಡಿಸಿತ್ತು.ಒಂದೇ ಸಮನೆ ಬೀಸುತ್ತಿದ್ದ.. ತಣ್ಣನೆ ಗಾಳಿ... ಕಣ್ಣಿನ ಉದ್ದಗಲಕ್ಕೂ ಆವರಿಸಿದ.. ಹಸಿರು..,ಇಬ್ಬನಿ ಮೋಡಗಳ ಮೇಲೆ ತೇಲಿದ ಅನುಭವ.. ಮನಸ್ಸಿಗೆ ಹಿತ ನೀಡುತ್ತಿತ್ತು.ಪ್ರಕೃತಿ ಅವರ್ಣನೀಯ ಸುಂದರತೆ, ಜೊತೆಗಾರರ ಸಹಕಾರ, ಸಮಯೋಚಿತ ಹಾಸ್ಯ ಚಟಾಕಿಗಳು.. ದೇಹಕ್ಕಾದ ಆಯಾಸವನ್ನು ಕಡಿಮೆ ಗೊಳಿಸಿತ್ತು.ಯಾರಿಗೂ ಮರಳುವ ಬಯಕೆಯೇ ಇಲ್ಲ... ಆದರೆ ... ಸಮಯ ಸರಿಯುತ್ತಿತ್ತು.. ನಮಗೆ ಬೇರೆ ದಾರಿ ಇರಲಿಲ್ಲ.. "ಎಡಕಲ್ಲು ಗುಡ್ಡದ ಮೇಲೆ" ಹಳೇ ಕನ್ನಡ ಚಿತ್ರವನ್ನು ಮೆಲುಕು ಹಾಕುತ್ತ..ಪ್ರಕ್ರುತಿ ಸಹಜವಾದ ಸುಮಾರು ೩೦೦೦೦ ವರ್ಷ್ ಹಳೆಯ .. ಗವಿಯನ್ನು ವೀಕ್ಷಿಸಿ.. ಮತ್ತೆರಡು ಸ್ಥಳ ನೋಡಲೆಂದು ಅವಸರವಾಗಿ ಬೆಟ್ಟ ಇಳಿದರೂ.... ಏನೋ ಒಂದು ಸುಂದರ ಅನುಭವ ಎಲ್ಲರ ಮನಸ್ಸಿನಲ್ಲಿತ್ತು. "ಸೂಚಿಪ್ಪರ" ಜಲಪಾತ ಮತ್ತು ಪೊಕಟ್ ಲೇಕ್ ಗೆ ಹೋದಾಗ ಮಳೆ ಇದ್ದರೂ.. ನಮ್ಮ ಪ್ರಯಾಣ ಅಪೂರ್ಣ ಅನಿಸಲಿಲ್ಲ....ಮರಳುವಾಗ .... ಯಾಂತ್ರಿಕ ಬದುಕಿನ ಬವಣೆಗಳಿಂದ ಮುಕ್ತವಾಗಿ ಸಾರ್ಥಕವಾಗಿ ಕಳೆದ ಒಂದು ದಿನ ... ಎನ್ನುವ ಭಾವನೆ ಇತ್ತು.....

just chill..

3 comments:

The Voice Inside Me ... said...

keralada hasirina soundaryada varnane nimma padagallalli tumab chennagi moodi bandide....very nice article..keep writing...

Anonymous said...

ಪ್ರಿಯ ಚೈತ್ರ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

Anonymous said...

ಪ್ರಿಯ ಚೈತ್ರ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ